ಇನ್ನು, 1) ವಾಸ್ತು ಶಕ್ತಿಸ್ಥಿತಿ, 2) ವಾಸ್ತ್ವೇತರ ಶಕ್ತಿಸ್ಥಿತಿ, 3) ವೈಯುಕ್ತಿಕ ಶಕ್ತಿಸ್ಥಿತಿ – ಇವುಗಳಿಗೆ ಪರಿಹಾರೋಪಾಯಗಳಿಂತಿವೆ,
1. ಕ್ಷೇತ್ರದಲ್ಲಿ ಬದಲಾವಣೆಗಳು
ಸ್ಥಳವು ವಾಸ್ತು ಶಾಸ್ತ್ರಕ್ಕನುಗುಣವಾಗಿ ಇಲ್ಲದಿದ್ದರೆ; ಕೆಲವು ಕನಿಷ್ಠ ಆವಶ್ಯಕ ಪುನರ್ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ.
2. ಕಟ್ಟಡ/ರಚನೆಗಳಲ್ಲಿ ಬದಲಾವಣೆಗಳು
ರಚನೆಗಳು/ಕಟ್ಟಡಗಳು ವಾಸ್ತುವಿನ ಪ್ರಕಾರ ಉದ್ದೇಶಕ್ಕೆ ಅನುಶ್ರುತಿಯಲ್ಲಿ ಇಲ್ಲದಿದ್ದರೆ ಕೆಲವು ಕನಿಷ್ಠ ಆವಶ್ಯಕ ಪುನರ್ವ್ಯವಸ್ಥೆ ಮತ್ತು ಪುನರ್ರೂಪೀಕರಣ ಮಾಡಬೇಕಾಗುತ್ತದೆ.
3. ಕ್ಷೇತ್ರದ ಚಟುವಟಿಕೆಗಳಲ್ಲಿ ಬದಲಾವಣೆಗಳು
ಸಾಮನ್ಯವಾಗಿ ಸ್ಥಳದ ನಿರ್ದಿಷ್ಟ ಪ್ರದೇಶದಲ್ಲಿ ಉಕ್ತ ಚಟುವಟಿಕೆಗಳನ್ನು ನಿರ್ದೇಶಿಸಲಾಗಿದೆ; ಎಂದರೆ, ಅಡುಗೆ, ಕಛೇರಿ, ಹೊರೆ ಇಳಿಸುವುದು, ಪರಿಷ್ಕರಣೆ, ಹೊರೆ ಏರಿಸುವುದು, ಚಲನೆಗಳು ಇತ್ಯಾದಿ. ಇವು ಉದ್ದಿಷ್ಟ ಉದ್ದೇಶ/ವ್ಯಕ್ತಿಗೆ ಆವಶ್ಯಕ ಶಕ್ತಿ ಮತ್ತು ಸ್ಪಂದನ ಸ್ಥಿತಿಗೆ ಹೊಂದದಿರಬಹುದು. ಆಗ ಚಟುವಟಿಕೆಗಳ ಬದಲಾವಣೆ, ಪುನರ್ವ್ಯವಸ್ಥೆಗೊಳಿಸಬೇಕಾಗಬಹುದು.
4. ಪ್ರಧಾನ ಮತ್ತು ಉಪಕಟ್ಟಡಗಳಲ್ಲಿ ಚಟುವಟಿಕೆಗಳಲ್ಲಿ ಬದಲಾವಣೆಗಳು
ಸಾಮನ್ಯವಾಗಿ ಸ್ಥಳದ/ಕಟ್ಟಡದ ನಿರ್ದಿಷ್ಟ ಪ್ರದೇಶದಲ್ಲಿ ಉಕ್ತ ಚಟುವಟಿಕೆಗಳನ್ನು ನಿರ್ದೇಶಿಸಲಾಗಿದೆ; ಎಂದರೆ, ಅಡುಗೆ, ನಿದ್ರೆ, ಅಧ್ಯಯನ, ಅಂಗಡಿಯ ವಿವಿಧ ಚಟುವಟಿಕೆಗಳು, ಚಲನೆಗಳು ಇತ್ಯಾದಿ. ಇವು ಉದ್ದಿಷ್ಟ ಉದ್ದೇಶ/ವ್ಯಕ್ತಿಗೆ ಆವಶ್ಯಕ ಶಕ್ತಿ ಮತ್ತು ಸ್ಪಂದನ ಸ್ಥಿತಿಗೆ ಹೊಂದದಿರಬಹುದು. ಆಗ ಚಟುವಟಿಕೆಗಳ ಬದಲಾವಣೆ, ಪುನರ್ವ್ಯವಸ್ಥೆಗೊಳಿಸಬೇಕಾಗಬಹುದು.
5. ಕಟ್ಟಡ/ರಚನೆಗಳ ಒಳಹೊರಗೆ ಸೂಕ್ತವಾದ ವಿವಿಧ ಬಣ್ಣಗಳ ಬಳಕೆ (ವರ್ಣ ಪ್ರಯೋಗ)
ಪ್ರತಿಯೊಂದು ಚಕ್ರವೂ, ಪ್ರತಿಯೊಂದು ಗ್ರಹವೂ ತನ್ನದೇ ವರ್ಣವನ್ನು ಹೊಂದಿರುತ್ತದೆ. ವರ್ಣವಿಜ್ಞಾನವು ಜಾಣತನದ್ದು, ಯಾಕೆಂದರೆ ಚಕ್ರ ಮತ್ತು ಗ್ರಹಗಳ ಮೂಲಭೂತ ವರ್ಣ ವಿನ್ಯಾಸವನ್ನು ಹಾಗೆಯೇ ನೇರವಾಗಿ ಅನ್ವಯಿಸುವಂತಿಲ್ಲ. ಸಾಮಾನ್ಯವಾಗಿ ಎಲ್ಲರೂ ಸರಿಯಾದ ತಳಹದಿ ಇಲ್ಲದ ಮತ್ತು ಆದಿಮ ಹಂತದಲ್ಲಿರುವ ಅಧ್ಯಯನಗಳನ್ನು ಆಧರಿಸಿದ ವರ್ಣ ವಿನ್ಯಾಸ ಕ್ರಮಗಳನ್ನು ಅನುಸರಿಸುತ್ತಿದ್ದಾರೆ. ನಾವು ಯೋಗಶಾಸ್ತ್ರಾಧಾರಿತ[ಗ್ರಹಪೂರಕವಾದ] ಅತ್ಯಂತ ಸೂಕ್ತವೂ ಪ್ರಭಾವಿಯೂ ಆದ ವರ್ಣವಿಜ್ಞಾನವನ್ನು ಅನುಸರಿಸುತ್ತಿದ್ದೇವೆ.
ಬಣ್ಣಗಳು ಬಹಳ ಪರಿಣಾಮಕಾರಿಯಾಗಿರುತ್ತವೆ. ಬಣ್ಣಗಳ ಸರಿಯಾದ ಬಳಕೆಯು ಧನಾತ್ಮಕ ಪರಿಣಾಮಬೀರುತ್ತದೆ; ತಪ್ಪಾದ ಬಳಕೆಯು ಋಣಾತ್ಮಕವಾಗಿ ಪರಿಣಾಮ ಬೀರುವುದು ಅಷ್ಟೇ ಸತ್ಯ. ಕೆಲವೊಮ್ಮೆ ನಾವು ವಿವಿಧ ದಿಗ್ಭಾಗಗಳಿಗೆ ವಿಭಿನ್ನ ಬಣ್ಣ ಬಳಿಯಲು ಸಲಹೆ ಕೊಡುತ್ತೇವೆ. ಬಣ್ಣಗಳು ವಾಸ್ತುವಿನ ಋಣಾತ್ಮಕ ಪ್ರಭಾವವನ್ನು ತಗ್ಗಿಸಿಕೊಡುತ್ತವೆ. ಅವು ವಾಸ್ತುವಿನಲ್ಲಿ ಅವಶ್ಯಕ ಧನಾತ್ಮಕ ಪ್ರಭಾವವನ್ನು ಮಿಥ್ಯಾಕಾರ್ಯತಃ ವೃದ್ಧಿಸುವುದರಲ್ಲಿ ಸಮರ್ಥವಾಗುತ್ತವೆ.
ಪ್ರತಿಯೊಂದು ವೃತ್ತಿ, ವ್ಯಾಪಾರ, ಉತ್ಪನ್ನ ಇತ್ಯಾದಿಯೂ ತನ್ನದೇ ಆದ “ಶಕ್ತಿವರ್ಣ”[ಭೌತಿಕ ವರ್ಣವಲ್ಲ]ವನ್ನು ಹೊಂದಿರುತ್ತದೆ. ಅವು ತಮಗೆ ಪೂರಕ ಅಥವಾ ಮಾರಕವಾದ ಸ್ಥಳ/ವಾಸ್ತುಸ್ಥಳ/ವಾಸ್ತುವಿನಲ್ಲಿ ಇರಲು ಸಾಧ್ಯವಿದೆ. ಪ್ರಶಸ್ತ ವರ್ಣದ ಬಳಕೆಯು ಅತ್ಯವಶ್ಯ. ಕೆಲವೊಮ್ಮೆ ಸರಿತೂಕಗೊಳಿಸುವ ಬಣ್ಣದ ಬಳಕೆ ಮಾಡಬೇಕಾಗಿಬರುತ್ತದೆ. ವ್ಯವಹಾರಕ್ಕಾಗಲೀ ವಾಸಕ್ಕಾಗಲೀ ಒಳ್ಳೆಯ ಸ್ಥಳದ ಲಭ್ಯತೆಯು ನಗರಗಳಲ್ಲಿ ಕಷ್ಟಸಾಧ್ಯ. ಅಂತಹ ಪರಿಸ್ಥಿತಿಗಳಲ್ಲಿ ಬಣ್ಣಗಳು ಧನ, ಆರೋಗ್ಯ, ಮನುಷ್ಯ ಸಂಬಂಧ ಇತ್ಯಾದಿಗಳ ನಷ್ಟದ ಅಪಾಯವನ್ನು ಕಡಿಮೆಗೊಳಿಸಬಲ್ಲವು. ಅವು ಧನಾತ್ಮಕ ಪರಿಣಾಮವನ್ನು ವೃದ್ಧಿಸಬಲ್ಲವು.
6. ಸೂಕ್ತವಾದ ವರ್ಣದ ಉಡುಪುಗಳ ಬಳಕೆ (ವರ್ಣ ಪ್ರಯೋಗ)
ವಿವಿಧ ಬಣ್ಣಗಳ ಬಟ್ಟೆಗಳ ಧಾರಣೆಯು ಶಕ್ತಿಸ್ಥಿತಿಯನ್ನನುಸರಿಸಿ ಧನಾತ್ಮಕವಾಗಿ ಅಥವಾ ಋಣಾತ್ಮಕವಾಗಿ ಪರಿಣಾಮ ಬೀರುತ್ತವೆ.
7. ವೈವಿಧ್ಯಪೂರ್ಣ ಸ್ಫಟಿಕಗಳು, ಖನಿಜಗಳು ಮತ್ತು ರತ್ನಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ, ಸೂಕ್ತ ಗುಣಮಟ್ಟದಲ್ಲಿ, ಸೂಕ್ತ ಮಿಶ್ರಣದಲ್ಲಿ ಉದ್ದಿಷ್ಟ ಸ್ಥಳದಲ್ಲಿ ಬಳಸುವುದು.
ಸ್ಫಟಿಕ ರತ್ನಾದಿಗಳು ಶಕ್ತಿ ಮತ್ತು ಸ್ಪಂದನಗಳ ಸುಸ್ಥಿರ ಸಾಂದ್ರಣವಾಗಿವೆ. ಪ್ರತಿಯೊಂದು ಕಲ್ಲೂ ನಿರ್ದಿಷ್ಟವಾದ ಶಕ್ತಿ ಮತ್ತು ಸ್ಪಂದನವನ್ನು ಹೊಂದಿರುತ್ತದೆ. .ಕೆಲವು ಕಲ್ಲುಗಳು ಬಹಳ ಶಕ್ತಿಯುತವಾಗಿರುತ್ತವೆ. ವಾಸ್ತು ಮತ್ತು ವಾಸ್ತ್ವೇತರ ಧನಾತ್ಮಕ ಶಕ್ತಿ ವೃದ್ಧಿಗಾಗಿ ಮತ್ತು ಋಣಾತ್ಮಕ ಶಕ್ತಿಗಳ ನಿರ್ವೀರ್ಯತೆಗಾಗಿ ಅವುಗಳನ್ನು ಬಳಸಲಾಗುತ್ತದೆ. ಸೂಕ್ತ ರತ್ನ/ ಸೂಕ್ತ ಆಕಾರ, ಗುಣಮಟ್ಟ ಮತ್ತು ಪ್ರಮಾಣದ ಸಂಮಿಶ್ರಣವನ್ನು ವೈವಿಧ್ಯಮಯ ರೀತಿಯಲ್ಲಿ ಕಟ್ಟಡಗಳ ಒಳ ಹೊರಗೆಗಳಲ್ಲಿ ಬಳಸಲಾಗುತ್ತದೆ. ಅಯುಕ್ತ ರತ್ನವು ಸಾಮಾನ್ಯವಾಗಿ ಹಾನಿಯನ್ನುಂಟುಮಾಡುತ್ತದೆ.
ಕೆಲವು ರತ್ನಗಳು-
- ಶುದ್ಧ ಸ್ಫಟಿಕ
- ಗುಲಾಬಿ ಸ್ಫಟಿಕ
- ಅಮೆಥಿಸ್ಟ್
- ನೀಲ
- ನೀಲ ಟೋಪಾಜ್
- ಅಕ್ವಾಮೆರೈನ್
- ಲಾಪಿಸ್ ಲಾಝುಲಿ
- ವಜ್ರ
- ಕನಕ ಪುಷ್ಯರಾಗ/ಬಿಳಿ ಪುಷ್ಯರಾಗ
- ಕನಕ ಟೋಪಾಝ್
- ಸಿಟ್ರೈನ್
- ಜೇಡ್
- ಮರಕತ [ಪಚ್ಚೆ]
- ಪೆರಿಡಾಟ್
- ಪ್ರವಾಳ [ಹವಳ]
- ಚಂದ್ರಕಾಂತ ಮಣಿ
- ಮೌಕ್ತಿಕ [ಮುತ್ತು]
- ಕರ್ನೇಲಿಯನ್
- ಸನ್ ಸ್ಟೋನ್
- ಮಾಣಿಕ್ಯ
- ಕುರುಂದ
- ಗೋಮೇಧಿಕ
- ಗಾರ್ನೆಟ್
- ವೈಢೂರ್ಯ
- ಅಗೇಟ್[ಹಕೀಕ್]
- ಓನಿಕ್ಸ್
- ಟರ್ಮಾಲಿನ್
- ಶಾಲಗ್ರಾಮ ಶಿಲೆ
- ಶೋಣಭದ್ರಾ ಶಿಲೆ
- ಅಂಬಿಕಾ ಶಿಲೆ
- ನರ್ಮದಾ ಬಾಣ ಶಿಲೆ
ಇನ್ನೂ ಹಲವಾರು ಇವೆ.
8. ವೈವಿಧ್ಯಪೂರ್ಣ ಸ್ಫಟಿಕಗಳು, ಖನಿಜಗಳು ಮತ್ತು ರತ್ನಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ, ಸೂಕ್ತ ಗುಣಮಟ್ಟದಲ್ಲಿ, ಸೂಕ್ತ ಮಿಶ್ರಣದಲ್ಲಿ ಆವಶ್ಯಕತಾನುಸಾರ ವೈಯುಕ್ತಿಕವಾಗಿ ಸೂಕ್ತ ಸ್ಥಾನದಲ್ಲಿ ಧರಿಸುವುದು.
ವಿವಿಧ ಸ್ಫಟಿಕ ಮತ್ತು ರತ್ನಗಳು, ಲೋಹಗಳು, ಮಣಿಗಳು, ವೈಯುಕ್ತಿಕ ಧಾರಣೆಯಲ್ಲಿ ಋಣಾತ್ಮಕ ಶಕ್ತಿ ಸ್ಥಿತಿಯನ್ನು ವಿರೋಧಿಸಲು ಮತ್ತು ಧನಾತ್ಮಕ ಶಕ್ತಿಸ್ಥಿತಿಯನ್ನು ಉದ್ದೀಪಿಸಲು ಬಳಸಲ್ಪಡುತ್ತವೆ. ಯುಕ್ತ ಪ್ರಮಾಣ ಮತ್ತು ಗುಣಟ್ಟದವುಗಳನ್ನು ಶರೀರದ ವಿವಿಧ ಭಾಗಗಳಲ್ಲಿ ಧರಿಸಲಾಗುತ್ತದೆ. ಅಯೋಗ್ಯ ಕಲ್ಲುಗಳು ತೊಂದರೆಗಳನ್ನು ತರುತ್ತವೆ ಎನ್ನುವುದನ್ನು ವಿಶೇಷವಾಗಿ ಗಮನಿಸಬೇಕು.
ಕೆಲವು ಇಂತಿವೆ-
- ಶುದ್ಧ ಸ್ಫಟಿಕ
- ಗುಲಾಬಿ ಸ್ಫಟಿಕ
- ಅಮೆಥಿಸ್ಟ್
- ನೀಲ
- ನೀಲ ಟೋಪಾಜ್
- ಅಕ್ವಾಮೆರೈನ್
- ವಜ್ರ
- ಕನಕ ಪುಷ್ಯರಾಗ/ಬಿಳಿ ಪುಷ್ಯರಾಗ
- ಕನಕ ಟೋಪಾಝ್
- ಸಿಟ್ರೈನ್
- ಜೇಡ್
- ಮರಕತ [ಪಚ್ಚೆ]
- ಪೆರಿಡಾಟ್
- ಪ್ರವಾಳ [ಹವಳ]
- ಚಂದ್ರಕಾಂತ ಮಣಿ
- ಮೌಕ್ತಿಕ [ಮುತ್ತು]
- ಕರ್ನೇಲಿಯನ್
- ಸನ್ ಸ್ಟೋನ್
- ಮಾಣಿಕ್ಯ
- ಕುರುಂದ
- ಗೋಮೇಧಿಕ
- ಗಾರ್ನೆಟ್
- ವೈಢೂರ್ಯ
- ಅಗೇಟ್[ಹಕೀಕ್]
- ಓನಿಕ್ಸ್
- ಟರ್ಮಾಲಿನ್
- ಶಿಲಾರಾಳ[ಆಂಬರ್]
- ಶಾಲಗ್ರಾಮ ಶಿಲೆ
- ರುದ್ರಾಕ್ಷಿ
- ತುಳಸೀಮಣಿ
- ರಕ್ತಚಂದನ ಮಣಿ
- ಕಮಲ ಬೀಜ
- ಪಾರಜ ಮಣಿ
- ವಿವಿಧ ಲೋಹಗಳ ಉಂಗುರಗಳು ಮತ್ತು ಬಳೆಗಳು
ಇನ್ನೂ ಹಲವಾರು ಇವೆ.
9. ವಿವಿಧ ರೂಪದ ದರ್ಪಣಗಳು; ವಿವಿಧ ಆಕಾರ ಮತ್ತು ಗಾತ್ರದ ಕನ್ನಡಿಯಲ್ಲಿ ಕೆತ್ತಿದ ಯಂತ್ರಗಳ ಬಳಕೆ (ಸೌರತಂತ್ರ ಪ್ರಯೋಗ ಅಥವಾ ದರ್ಪಣ ಪ್ರಯೋಗ)
- ಸೌರತಂತ್ರಪ್ರಯೊಗಅಥವಾದರ್ಪಣಪ್ರಯೋಗ 1 [ವಾಸ್ತುವಿನಲ್ಲಿ]
ವಾಸ್ತುವಿನ ಶಕ್ತಿ ಮತ್ತು ಸ್ಪಂದನಗಳನ್ನು ಸರಿಪಡಿಸಲು ಮತ್ತು ನಿಯಂತ್ರಿಸಲು ಕೆಲವಾರು ರೀತಿಯ ಕನ್ನಡಿಗಳನ್ನು ಬಳಸಲಾಗುತ್ತದೆ. ಉದಾಹರಣೆಗೆ- ವಿವಿಧ ಗಾತ್ರದ ಚೌಕ, ಆಯತ, ಉನ್ನತ, ನಿಮ್ನ ದರ್ಪಣಗಳನ್ನು ಈ ಕೆಳಗಿನ ಉದ್ದೇಶಗಳಿಗೆ ಬಳಸಲಾಗುತ್ತದೆ.
- ಶೂನ್ಯಸ್ಥಳಗಳನ್ನು ಸರಿಪಡಿಸಲು.
- ಒತ್ತಡ ಹೇರಲು.
- ಆಕಾಶಾವಕಾಶ ವೃದ್ಧಿಸಲು ಅಥವಾ ಕ್ಷೀಣಿಸಲು.
- ಮಿಥ್ಯಾಕಾರ್ಯತಃ ಸ್ಥಾನಾಂತರಿಸಲು.
- ತತ್ವಗಳ ನಿಯಂತ್ರಣದಲ್ಲಿ.
- ವಿಥ್ಯಾಕಾರ್ಯತಃ ಭೂಸ್ವರೂಪದ ಬದಲಾವಣೆಗೆ.
ದರ್ಪಣಗಳ ಅಯುಕ್ತ ಉಪಯೊಗವು ಖಂಡಿತವಾಗಿ ಹಾಳುಗೆಡವುತ್ತದೆ.
- ಸೌರತಂತ್ರಪ್ರಯೊಗಅಥವಾದರ್ಪಣಪ್ರಯೋಗ 2 [ಸ್ಥಳದ ವಾಸ್ತ್ವೇತರ ಶಕ್ತಿಸ್ಥಿತಿಯಲ್ಲಿ]
ಸ್ಥಳದ ವಾಸ್ತ್ವೇತರ ಶಕ್ತಿ ಮತ್ತು ಸ್ಪಂದನಗಳನ್ನು ನಿಯಂತ್ರಿಸಲು/ ನಿವಾರಿಸಲು/ ದಿಕ್ ಚ್ಯುತಿಗೊಳಿಸಲು/ ಸ್ಥಾನಾಂತರಿಸಲು ಹಲವಾರು ರೀತಿಯ ಮತ್ತು ವಿವಿಧ ಗಾತ್ರದ ದರ್ಪಣಗಳನ್ನು ಬಳಸಲಾಗುತ್ತದೆ.
ಉದಾಹರಣೆಗೆ-
- ವೃತ್ತ ಉನ್ನತ ದರ್ಪಣ
- ಅಷ್ಟಭುಜ ಸಮತಲ ದರ್ಪಣ
- ತ್ರಿಕೋನ ಸಮತಲ ದರ್ಪಣ
- ವೃತ್ತ ಸಮತಲ ದರ್ಪಣ
- ಚೌಕ ಸಮತಲ ದರ್ಪಣ
- ಸುರುಳಿ ಕೆತ್ತಿದ ಚೌಕ ಸಮತಲ ದರ್ಪಣ
- ಸುರುಳಿ ಕೆತ್ತಿದ ತ್ರಿಕೋನ ಸಮತಲ ದರ್ಪಣ
- ಭೂಲಂಬ ರೇಖೆಗಳನ್ನು ಕೆತ್ತಿದ ಚೌಕ ಸಮತಲ ದರ್ಪಣ
- ಭೂಸಮಾನಾಂತರ ರೇಖೆಗಳನ್ನು ಕೆತ್ತಿದ ಚೌಕ ಸಮತಲ ದರ್ಪಣ
ದರ್ಪಣಗಳ ಅಯುಕ್ತ ಉಪಯೊಗವು ಖಂಡಿತವಾಗಿ ಹಾಳುಗೆಡವುತ್ತದೆ.
10. ಕಂಬ ಮತ್ತು ಸರಳು ವಿಧಾನ
ಸ್ತಂಭಪ್ರಯೋಗ1 [ವಾಸ್ತುವಿನಲ್ಲಿ]
ವಿವಿಧ ಲೋಹಗಳ, ಗಾತ್ರಗಳ ಮತ್ತು ಬಣ್ಣಗಳ ಸರಳುಗಳು, ಕೊಳವೆಗಳು ಮತ್ತು ಕಂಬಗಳನ್ನು ಉಪಯೋಗಿಸಿ ವಾಸ್ತುವಿನ ಹಲವಾರು ಶಕ್ತಿ ಸ್ಪಂದನಗಳನ್ನು ನಿಯಂತ್ರಿಸಲಾಗುತ್ತದೆ.
ಸ್ತಂಭಪ್ರಯೋಗ2 [ಸ್ಥಳದ ವಾಸ್ತ್ವೇತರ ಶಕ್ತಿಸ್ಥಿತಿಯಲ್ಲಿ]
ಸ್ಥಳದಲ್ಲಿರುವ ವಾಸ್ತ್ವೇತರ ಶಕ್ತಿ ಮತ್ತು ಸ್ಪಂದನಗಳನ್ನು ನಿಯಂತ್ರಿಸಲು, ನಿವಾರಿಸಲು ಮತ್ತು ಸ್ಥಾನಾಂತರಿಸಲು ವಿವಿಧ ಲೋಹಗಳ, ಗಾತ್ರಗಳ ಮತ್ತು ಬಣ್ಣಗಳ ಸರಳುಗಳು, ಕೊಳವೆಗಳು ಮತ್ತು ಕಂಬಗಳನ್ನು ಉಪಯೋಗಿಸಲಾಗುತ್ತದೆ. ಇದರೊಂದಿಗೆ ಪೂರಕವಾಗಿ ಇನ್ನಿತರ ದ್ರವ್ಯಗಳನ್ನು ಉಪಯೋಗಿಸಲಾಗುತ್ತದೆ.
11. ಶಕ್ತಿಯನ್ನು ಭೂಮಿಯೊಳಕ್ಕೆ ಮತ್ತು ಅನ್ಯ ಸ್ಥಳಕ್ಕೆ ಸ್ಥಾನಾಂತರಿಸುವುದು (ಸ್ಥಾನಾಂತರ ಪ್ರಯೋಗ)
ಕೆಲವು ತಂತ್ರಗಳಿಂದ ಸ್ಥಳದಲ್ಲಿರುವ ಕೆಲವು ಹಾನಿಕಾರಕ ಶಕ್ತಿಗಳನ್ನು ಮತ್ತು ಶಕ್ತಿ ಸಂಚಾರಗಳನ್ನು ಸ್ಥಾನಾಂತರಿಸ ಬೇಕಾಗಿಬರುತ್ತದೆ; ಕೆಲವನ್ನು ಭೂಮಿಯೊಳಕ್ಕೆ ತಳ್ಳಬೇಕಾಗಿ ಬರುತ್ತದೆ.
12. ರಸ ಪ್ರಯೋಗ ( ಸೂಚನೆ: ಇದು ಪಾರಜ- ರಸವಲ್ಲ) (ವೈಯುಕ್ತಿಕ ಮತ್ತು ಕ್ಷೇತ್ರೋದ್ದೇಶಗಳೆರಡರಲ್ಲೂ ಪ್ರಯೋಗಿಸಲಾಗುತ್ತದೆ)
ಇವುಗಳು ವಿವಿಧ ರೀತಿಯ ಅನಪೇಕ್ಷಿತ ಶಕ್ತಿ ಮತ್ತು ಸ್ಪಂದನಗಳನ್ನು ಸ್ಪಂದನಗಳನ್ನುವಿಶೇಷತಃ ಮನುಷ್ಯ ಮನಸ್ಸಿನ ಕಾರಣದಿಂದ ಇರುವವುಗಳನ್ನು (ದುಷ್ಟ ವಾಮಾಚಾರ ಪ್ರಯೋಗ ಇತ್ಯಾದಿ) ನಿಯಂತ್ರಿಸಲು/ ನಿವಾರಿಸಲು/ ಸ್ಥಾನಾಂತರಿಸಲು ಇರುವ ವಿಶಿಷ್ಟ ವಿಧಾನಗಳು. ಕಲ್ಲುಪ್ಪು, ರಾಸಾಯನಿಕಗಳು, ಲೋಹಗಳು, ರತ್ನಗಳ ಚೂರುಗಳು-ಪುಡಿಗಳು, ಬೀಜಗಳು(ಧಾನ್ಯಗಳು), ಮೂಲಿಕಾ ಭಾಗಗಳು, ಮರಗಳ ಭಾಗಗಳು, ಇನ್ನೂ ಹಲವು ವಸ್ತುಗಳನ್ನು ನೀರು ಸಹಿತ ಮತ್ತು ಅಗ್ನಿ ರಹಿತವಾಗಿ ಬಳಸಲಾಗುತ್ತದೆ. ಈ ವಿಧಾನದಲ್ಲಿ ಉಪಯುಕ್ತ ಶಕ್ತಿ ಮತ್ತು ಸ್ಪಂದನಗಳನ್ನು ಸೃಷ್ಟಿಸಲು/ ಉದ್ದೀಪಿಸಲು ಬಳಸಬಹುದಾಗಿದೆ.
13. ರಸಾಗ್ನಿ ಪ್ರಯೋಗ (ವೈಯುಕ್ತಿಕ ಮತ್ತು ಕ್ಷೇತ್ರೋದ್ದೇಶಗಳೆರಡರಲ್ಲೂ ಪ್ರಯೋಗಿಸಲಾಗುತ್ತದೆ)
ಇವುಗಳು ವಿವಿಧ ರೀತಿಯ ಅನಪೇಕ್ಷಿತ ಶಕ್ತಿ ಮತ್ತು ಸ್ಪಂದನಗಳನ್ನು ಸ್ಪಂದನಗಳನ್ನುವಿಶೇಷತಃ ಮನುಷ್ಯ ಮನಸ್ಸಿನ ಕಾರಣದಿಂದ ಇರುವವುಗಳನ್ನು (ದುಷ್ಟ ವಾಮಾಚಾರ ಪ್ರಯೋಗ ಇತ್ಯಾದಿ) ನಿಯಂತ್ರಿಸಲು/ ನಿವಾರಿಸಲು/ ಸ್ಥಾನಾಂತರಿಸಲು ಇರುವ ವಿಶಿಷ್ಟ ವಿಧಾನಗಳು. ಕಲ್ಲುಪ್ಪು, ರಾಸಾಯನಿಕಗಳು, ಲೋಹಗಳು, ರತ್ನಗಳ ಚೂರುಗಳು-ಪುಡಿಗಳು, ಬೀಜಗಳು(ಧಾನ್ಯಗಳು), ಮೂಲಿಕಾ ಭಾಗಗಳು, ಮರಗಳ ಭಾಗಗಳು, ಇನ್ನೂ ಹಲವು ವಸ್ತುಗಳನ್ನು ನೀರು ಮತ್ತು ಅಗ್ನಿಗಳ ಸಹಿತ ಬಳಸಲಾಗುತ್ತದೆ. ಈ ವಿಧಾನದಲ್ಲಿ ಉಪಯುಕ್ತ ಶಕ್ತಿ ಮತ್ತು ಸ್ಪಂದನಗಳನ್ನು ಸೃಷ್ಟಿಸಲು/ ಉದ್ದೀಪಿಸಲು ಬಳಸಬಹುದಾಗಿದೆ.
14. ಮೂಲಿಕಾ ಪ್ರಯೊಗ (ಕಟ್ಟಡದ ಒಳಹೊರಗೆಗಳಲ್ಲಿ ಪ್ರಯೋಗಿಸಲಾಗುತ್ತದೆ)
ವಿವಿಧ ಮೂಲಿಕಾ ಸಸ್ಯಗಳನ್ನು ಕಟ್ಟಡದ ಒಳಹೊರಗೆಗಳಲ್ಲಿ ಬಳಸಿ ವಾಸ್ತು ಜನಿತ ಶಕ್ತಿ ಸ್ಪಂದನಗಳನ್ನು ನಿಯಂತ್ರಿಸಲಾಗುತ್ತದೆ. ಈ ವಿಧಾನದಲ್ಲಿ ಅಪೇಕ್ಷಿತ ಶಕ್ತಿ ಸ್ಪಂದನಗಳ ಉತ್ಪತ್ತಿ/ ಉದ್ದೀಪನವು ಸಾಧ್ಯವಿದೆ.
15. ವೃಕ್ಷ ಪ್ರಯೋಗ (ಕಟ್ಟಡದ ಒಳಹೊರಗೆಗಳಲ್ಲಿ ಪ್ರಯೋಗಿಸಲಾಗುತ್ತದೆ)
ವಿವಿಧ ಮರಗಳನ್ನು ಕಟ್ಟಡದ ಒಳಹೊರಗೆಗಳಲ್ಲಿ ಬಳಸಿ ವಾಸ್ತು ಜನಿತ ಶಕ್ತಿ ಸ್ಪಂದನಗಳನ್ನು ನಿಯಂತ್ರಿಸಲಾಗುತ್ತದೆ. ಈ ವಿಧಾನದಲ್ಲಿ ಅಪೇಕ್ಷಿತ ಶಕ್ತಿ ಸ್ಪಂದನಗಳ ಉತ್ಪತ್ತಿ/ ಉದ್ದೀಪನವು ಸಾಧ್ಯವಿದೆ.
16. ಲೋಹ ಪ್ರಯೋಗ (ಕಟ್ಟಡದ ಒಳಹೊರಗೆಗಳಲ್ಲಿ ಪ್ರಯೋಗಿಸಲಾಗುತ್ತದೆ)
ವಿವಿಧ ಲೋಹಗಳನ್ನು ಕಟ್ಟಡದ ಒಳಹೊರಗೆಗಳಲ್ಲಿ ಬಳಸಿ ವಾಸ್ತು ಜನಿತ ಶಕ್ತಿ ಸ್ಪಂದನಗಳನ್ನು ನಿಯಂತ್ರಿಸಲಾಗುತ್ತದೆ. ಈ ವಿಧಾನದಲ್ಲಿ ಅಪೇಕ್ಷಿತ ಶಕ್ತಿ ಸ್ಪಂದನಗಳ ಉತ್ಪತ್ತಿ/ ಉದ್ದೀಪನವು ಸಾಧ್ಯವಿದೆ.
17. ಧೂಪ ಪ್ರಯೋಗ (ಕಟ್ಟಡದ ಒಳಹೊರಗೆಗಳಲ್ಲಿ ಪ್ರಯೋಗಿಸಲಾಗುತ್ತದೆ)
ವಿವಿಧ “ಧೂಪ”ಗಳನ್ನು ಕಟ್ಟಡದ ಒಳಹೊರಗೆಗಳಲ್ಲಿ ಬಳಸಿ ವಾಸ್ತು ಜನಿತ ಶಕ್ತಿ ಸ್ಪಂದನಗಳನ್ನು ನಿಯಂತ್ರಿಸಲಾಗುತ್ತದೆ. “ಧೂಪ”ವೆಂದರೆ ಮೂಲಿಕಾ ಸಸ್ಯ/ಮರಗಳ ಭಾಗಗಳು, ರಾಸಾಯನಿಕಗಳು, ಲೋಹಗಳ ಪುಡಿಗಳು ಮತ್ತು ರತ್ನಗಳ ಪುಡಿಗಳ ಮಿಶ್ರಣ. ವಿವಿಧ ರೀತಿಯ ಧೂಪಗಳನ್ನು ಕೆಂಡಕ್ಕೆ ಹಾಕಿ ಧನಾತ್ಮಕವಾಗಿ ಪ್ರೇರಿತವಾಗಿರುವ ಹೊಗೆಗಾಳಿಯನ್ನು ಸೃಷ್ಟಿಸಲಾಗುತ್ತದೆ. ಈ ವಿಧಾನದಲ್ಲಿ ಅಪೇಕ್ಷಿತ ಶಕ್ತಿ ಸ್ಪಂದನಗಳ ಉತ್ಪತ್ತಿ/ ಉದ್ದೀಪನವು ಸಾಧ್ಯವಿದೆ.
18. ದೋಷಕಾರಕ ವಸ್ತುಗಳನ್ನು ನಿವಾರಿಸುವುದು.
ಕಟ್ಟಡದ ಒಳಗೆ ಮತ್ತು ಪರಿಸರದಲ್ಲಿ ಹಾನಿಕಾರಕ ಶಕ್ತಿ ಮತ್ತು ಸ್ಪಂದನಗಳಿರುವ ವಸ್ತುಗಳು ಇರಬಹುದು. ಅಂಥವುಗಳನ್ನು ದೂರೀಕರಿಸುವುದು ಅಗತ್ಯ.
19. ಆಧುನಿಕ ವಸ್ತುಗಳನ್ನು ಕಟ್ಟಡದ ಒಳಹೊರಗೆಗಳಲ್ಲಿ ಬಳಸುವುದು.
ಹಲವಾರು ವಸ್ತುಗಳು ಹಾನಿಕಾರಕ ಶಕ್ತಿ ಮತ್ತು ಸ್ಪಂದನಗಳ ನಿವಾರಣೆಯಲ್ಲಿ ಉಪಯುಕ್ತವಾಗುತ್ತವೆ; ಹಲವನ್ನು ಉಪಯುಕ್ತ ಶಕ್ತಿ ಮತ್ತು ಸ್ಪಂದನಗಳ ಹೆಚ್ಚಿಸುವಿಕೆಯಲ್ಲಿ ಬಳಸಲಾಗುತ್ತದೆ. ಅವುಗಳಲ್ಲಿ ಕೆಲವು- ಒಳಹೊರ ಕಾರಂಜಿಗಳು, ಉದ್ಯಾನ ನೆರಳುಬಲೆ, ಗಾಳಿಘಂಟೆ, ಘಂಟೆ, ಮೀನು ತೊಟ್ಟಿ, ತಂಪುಕಾರಕ, ಗಾಳಿ ನಿಯಂತ್ರಕ, ಬಣ್ಣದ ವಿದ್ಯುದ್ದೀಪ, ಬಾಗಿಲ ಸ್ವನಿಯಂತ್ರಕ, ತಿರುಗು ಕುರ್ಚಿ, ಪರದೆ, ತಳ್ಳುಗಾಳಿ ಯಂತ್ರ, ಬಾಹ್ಯಾಂತರಿಕ ಸಜ್ಜುಗೊಳಿಸುವ ಅನ್ಯ ಹಲವು ವಸ್ತುಗಳು ವಸ್ತುಗಳು ಮತ್ತು ಇನ್ನೂ ಹಲವಾರು ವಸ್ತುಗಳು.
20. ಪೂಜೆಗಳು (ವೈಯುಕ್ತಿಕ ಮತ್ತು ಕ್ಷೇತ್ರೋದ್ದೇಶಗಳೆರಡರಲ್ಲೂ ಪ್ರಯೋಗಿಸಲಾಗುತ್ತದೆ)
ಇದು ಪ್ರಸಿದ್ಧವಾದ ವಿಧಾನ. ಪೂಜೆಗಳನ್ನು ಮಾಡುವುದು ಒಂದು ಉಳಿದೆಲ್ಲಾ ಪರಿಹಾರ ವಿಧಾನಗಳಂತೆ ತನ್ನದೇ ಮಿತಿಗಳನ್ನು ಹೊಂದಿರುವ ಸಾಂಪ್ರದಾಯಿಕ ವಿಧಾನವಾಗಿದೆ. ಪೂಜೆಯು ಒಂದು ವಿಸ್ತಾರವಾದ ಪ್ರಪಂಚವಾಗಿದೆ. ಆಯ್ಕೆಯು ಅತಿ ಮುಖ್ಯ. ಸರಿಯಾದ ವಿಧಾನ ಮತ್ತು ಮನಸ್ಥಿತಿಯಲ್ಲಿ ಆಚರಿಸುವುದು ಅಷ್ಟೇ ಮುಖ್ಯ.
ಇದು ಹೆಚ್ಚು ಮತಕ್ರಿಯಾವಿಧಿ ರೂಪಿಯಾದುದು, ಆದರೂ ಹೆಚ್ಚು ವೈಜ್ಞಾನಿಕ ಸಮೀಪನವುಳ್ಳದ್ದು, ಈ ಸಾಂಪ್ರದಾಯಿಕ ತಂತ್ರಜ್ಞಾನದಿಂದ ಹೆಚ್ಚು ಜಾಗ್ರತೆಯಲ್ಲಿ ಆಯ್ಕೆ ಮತ್ತು ಅನ್ವಯಗಳನ್ನು ಮಾಡಲಾಗಿದೆ. ನಾವು ಎಲ್ಲಾ ಸೆಮೆಟಿಕ್ ಮತ್ತು ಸೆಮೆಟಿಕ್ ಅಲ್ಲದ(ಜೈನ ಬೌದ್ಧಾದಿ ಸಹಿತ ಹಿಂದೂ) ಮತ ಧರ್ಮಗಳಿಗೆ ಸೇರಿದ ನಮ್ಮ ಆಯ್ಕೆಗೆ ನಿಲುಕಿದ ಮತಕ್ರಿಯಾವಿಧಿಗಳ ಸಲಹೆಗಳನ್ನು ಕೊಡುತ್ತಿರುತ್ತೇವೆ. ನಮ್ಮ ಸಲಹಾಕಾಂಕ್ಷಿಗಳ ಮತಕ್ಕೆ ಸೇರಿದ ಮತಕ್ರಿಯಾವಿಧಿಗಳಲ್ಲಿ ಸೂಕ್ತ ಮತ್ತು ಪರ್ಯಾಪ್ತವಾದವುಗಳು ಲಭ್ಯವಾದರೆ ಅಂತವುಗಳನ್ನು; ಅಲ್ಲದಿದ್ದರೆ ವೈಜ್ಞಾನಿಕವಾದ- ಆಧುನೀಕೃತವಾದ- ಸಾಂಪ್ರದಾಯಿಕವಾದ ಹಿಂದೂ ಮತಕ್ರಿಯಾವಿಧಾನ ಸಾಗರದಿಂದ [ಜೈನ ಬೌದ್ಧ ಇತ್ಯಾದಿ ಸಹಿತ] ಆಯ್ದು ಸಲಹೆ ಕೊಡುತ್ತೇವೆ. ಈ ಸಾಂಪ್ರದಾಯಿಕ ತಂತ್ರಜ್ಞಾನವು ಹೆಚ್ಚು ವೈಯುಕ್ತಿಕವಾಗಿ ಅಥವಾ ಗುಂಪಿಗಾಗಿ ಅನ್ವಯಿಸಲ್ಪಡುವ ಋಣಾತ್ಮಕವಾಗಿರುವುದನ್ನು ತಗ್ಗಿಸಿ ಧನಾತ್ಮಕವಾದ ಶಕ್ತಿ ಸ್ಪಂದನಗಳನ್ನು ವೃದ್ಧಿಸಲಿರುವ ತಂತ್ರಜ್ಞಾನವಾಗಿದೆ.
21. ಹೋಮ/ಯಜ್ಞ (ವೈಯುಕ್ತಿಕ ಮತ್ತು ಕ್ಷೇತ್ರೋದ್ದೇಶಗಳೆರಡರಲ್ಲೂ ಪ್ರಯೋಗಿಸಲಾಗುತ್ತದೆ)
ಇದು ಪ್ರಸಿದ್ಧವಾದ ವಿಧಾನ. ಹೋಮ/ಯಜ್ಞಗಳನ್ನು ಮಾಡುವುದು ಒಂದು ಉಳಿದೆಲ್ಲಾ ಪರಿಹಾರ ವಿಧಾನಗಳಂತೆ ತನ್ನದೇ ಮಿತಿಗಳನ್ನು ಹೊಂದಿರುವ ಸಾಂಪ್ರದಾಯಿಕ ವಿಧಾನವಾಗಿದೆ. ಹೋಮ/ಯಜ್ಞವು ಒಂದು ವಿಸ್ತಾರವಾದ ಪ್ರಪಂಚವಾಗಿದೆ. ಆಯ್ಕೆಯು ಅತಿ ಮುಖ್ಯ. ಸರಿಯಾದ ವಿಧಾನ ಮತ್ತು ಮನಸ್ಥಿತಿಯಲ್ಲಿ ಆಚರಿಸುವುದು ಅಷ್ಟೇ ಮುಖ್ಯ.
22. ವ್ರತ/ಜಪ/ಧ್ಯಾನ/ಪ್ರಾರ್ಥನೆ (ವೈಯುಕ್ತಿಕ ಮತ್ತು ಕ್ಷೇತ್ರೋದ್ದೇಶಗಳೆರಡರಲ್ಲೂ ಪ್ರಯೋಗಿಸಲಾಗುತ್ತದೆ)
ಇದು ಪ್ರಸಿದ್ಧವಾದ ವಿಧಾನ. ಅವುಗಳನ್ನು ಮಾಡುವುದು ಉಳಿದೆಲ್ಲಾ ಪರಿಹಾರ ವಿಧಾನಗಳಂತೆ ತನ್ನದೇ ಮಿತಿಗಳನ್ನು ಹೊಂದಿರುವ ಸಾಂಪ್ರದಾಯಿಕ ವಿಧಾನವಾಗಿದೆ. ಹೋಮ/ಯಜ್ಞವು ಒಂದು ವಿಸ್ತಾರವಾದ ಪ್ರಪಂಚವಾಗಿದೆ. ಆಯ್ಕೆಯು ಅತಿ ಮುಖ್ಯ. ಸರಿಯಾದ ವಿಧಾನ ಮತ್ತು ಮನಸ್ಥಿತಿಯಲ್ಲಿ ಆಚರಿಸುವುದು ಅಷ್ಟೇ ಮುಖ್ಯ.
23. ದೇವಾಲಯಗಳು/ಶಕ್ತಿ ಕೇಂದ್ರಗಳು (ವೈಯುಕ್ತಿಕ ಮತ್ತು ಕ್ಷೇತ್ರೋದ್ದೇಶಗಳೆರಡರಲ್ಲೂ ಪ್ರಯೋಗಿಸಲಾಗುತ್ತದೆ)
ಇದು ಅತ್ಯುಪಯುಕ್ತವಾದ ಸಾಂಪ್ರದಾಯಿಕ ವಿಧಾನ. ಭಾರತದಲ್ಲಿ [ಪ್ರಪಂಚದ ಎಲ್ಲೆಡೆಗಳಲ್ಲೂ] ತುಂಬಾ ಸಹಜ ಮತ್ತು ಕೃತಕವಾಗಿ ನಿರ್ಮಿಸಲ್ಪಟ್ಟ ಶಕ್ತಿ ಮತ್ತು ಸ್ಪಂದನ ಕೇಂದ್ರಗಳು ಇವೆ. ಹಲವಾರು ರೀತಿಯ ದೇವಾಲಯಗಳು ಮತ್ತು ಸ್ಥಳಗಳು ಇವೆ. ಏನನ್ನು ಮಾಡಬೇಕು? ಹೇಗೆ ಮಾಡಬೇಕು? ಎಲ್ಲಿ ಮಾಡಬೇಕು? ಎನ್ನುವುದು ಇಲ್ಲಿ ಕೀಲಿಗೈ.
ಇದು ನಮ್ಮ ಪೂರ್ವಜರ ಅದರಲ್ಲೂ ಭಾರತೀಯರ ಒಂದು ಉತ್ತಮವಾದ ಪ್ರಾಚೀನ ಅನ್ವಯಿಕ ಶಕ್ತಿವಿಜ್ಞಾನವಾಗಿದೆ. ಇಂತಹ ಸ್ಥಳಗಳೊಂದಿಗೆ ಜಾಗ್ರತೆಯಾಗಿ ವೈಜ್ಞಾನಿಕ ಸಮೀಪನವಿರುವ ಶಾರೀರಿಕ ಮತ್ತು ಮಾನಸಿಕ ಸಂಪರ್ಕ ಸ್ಥಾಪನೆಯು ವಾಸ್ತು ಸ್ಥಿತಿಯ ಪರಿಣಾಮದ ನಿಯಂತ್ರಣದಲ್ಲಿ ಅತ್ಯುಪಯುಕ್ತವಾಗಿರುತ್ತದೆ.
ಇಂತಹ ಸ್ಥಳಗಳೊಂದಿಗೆ ಜಾಗ್ರತೆಯಾಗಿ ವೈಜ್ಞಾನಿಕ ಸಮೀಪನವಿರುವ ಶಾರೀರಿಕ ಮತ್ತು ಮಾನಸಿಕ ಸಂಪರ್ಕ ಸ್ಥಾಪನೆಯ ಮೂಲಕ ಸ್ಥಳೀಯವಾದ ಋಣಾತ್ಮಕವಾದವುಗಳನ್ನು ಕ್ಷೀಣಿಸಿ ಧನಾತ್ಮಕವಾದ ಶಕ್ತಿ ಸ್ಪಂದನಗಳನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಹಾಗೂ ವ್ಯಕ್ತಿಯ/ ಕುಟುಂಬದ/ ಸಂಸ್ಥೆಯ ಕ್ಷೇಮಾಭಿವೃದ್ಧಿಗೆ ಅತ್ಯುಪಕಾರಿಯಾಗುತ್ತದೆ.
24. ರೇಕಿ, ಪ್ರಾಣಿಕ್ ಹೀಲಿಂಗ್, ಸ್ಫಟಿಕ-ರತ್ನ ಚಿಕಿತ್ಸೆ ಇತ್ಯಾದಿ ಶಕ್ತಿ ಚಿಕಿತ್ಸಾ ತಂತ್ರಗಳು.
ರೇಕಿ, ಪ್ರಾಣಿಕ್ ಹೀಲಿಂಗ್, ಸ್ಫಟಿಕ ಮತ್ತು ರತ್ನ ಚಿಕಿತ್ಸೆ ಮತ್ತು ಹಲವು ಹೆಸರಿಲ್ಲದ ಸಾಂಪ್ರದಾಯಿಕ ಮತ್ತು ಆಧುನಿಕ ವಿಧಾನಗಳು ಉಪಯುಕ್ತ ಪರಿಹಾರಗಳಾಗಿವೆ.
25. ಶಕ್ತ್ಯಾಧಾರಿತ “ವಮನ- ವಿರೇಚನ”
ಇದು ಕೋಶ ಶರೀರಗಳನ್ನು ಶುದ್ಧೀಕರಿಸುವ ವಿಚಿತ್ರವಾದ ಸಾಂಪ್ರದಾಯಿಕವಾದ ವಿಧಾನವಾಗಿದೆ. ಇದು ಆಯುರ್ವೇದದ ಚಿಕಿತ್ಸಾ ವಿಧಾನಕ್ಕೆ ಸಂವಾದಿಯಾಗಿದೆ. ಆದರೆ ಇದು ಶಕ್ತ್ಯಾಧಾರಿತವಾದುದು.ಇದರಲ್ಲಿ ಚಕ್ರ ಮತ್ತು ನಾಡಿಗಳಲ್ಲಿ ಸಂಚಿತವಾದ/ಪ್ರವಿಷ್ಟವಾದ ಋಣಾತ್ಮಕ ಶಕ್ತಿಗಳನ್ನು ಒಟ್ಟಿಗೇ ನಿವಾರಿಸಲಾಗುತ್ತದೆ. ರಸಪ್ರಯೋಗ ಮತ್ತು ರಸಾಗ್ನಿಪ್ರಯೋಗಗಳಿಗೆ ಸಂವಾದಿಗಳನ್ನು ವ್ಯಕ್ತಿಯ ಚಕ್ರ ಮತ್ತು ನಾಡಿಗಳ ಶುದ್ಧಿಯಲ್ಲಿ ಬಳಸಲಾಗುತ್ತದೆ.
26. ಶಕ್ತ್ಯಾಧಾರಿತ ಶುದ್ಧಿಕ್ರಿಯಾ ವಿಧಾನಗಳು (ವೈಯುಕ್ತಿಕ ಉದ್ದೇಶಕ್ಕೆ)
ಇದು ಸಾಮಾನ್ಯವಾಗಿ ಪ್ರಾಣಮಯ ಕೋಶದ ಶುದ್ಧಿಯ ವಿಚಿತ್ರವಾದ ವಿಧಾನವಾಗಿದೆ. – ಬಹಳ ಉಪಯುಕ್ತವಾದುದು. ಇದಕ್ಕೆ ರೇಕಿ ಮತ್ತು ಪ್ರಾಣಿಕ್ ಹೀಲಿಂಗ್ ಗಳೊಂದಿಗೆ ಹೋಲಿಕೆ ಇದೆ.
27. ಆಯುರ್ವೇದ, ಹೋಮಿಯೋಪತಿ, ಅಲೋಪತಿ ಮತ್ತು ಹಲವು ಚಿಕಿತ್ಸೆಗಳು
ಇವುಗಳಿಗೆ ವಿವರಣೆ ಗತ್ಯವಿಲ್ಲ. ಆದರೆ ಸರಿಯಾದ ವಿಧಾನದ, ಮತ್ತು ವಿಧಾನಗಳ ಮಿಶ್ರಣದ ಆಯ್ಕೆಯು ಕೀಲಿಗೈ.
28. ಯೋಗಾಸನ, ಪ್ರಾಣಾಯಾಮ
ಇದು ಪ್ರಸಿದ್ಧವಾದುದು. ಆದರೆ ನಿಯಮಿತವಾಗಿ ಸರಿಯಾದ ವಿಧಾನದಲ್ಲಿ ಆಚರಿಸುವುದಿಲ್ಲಿ ಕೀಲಿಗೈ. ಇವುಗಳು ಅಷ್ಟಾಂಗ ಯೋಗ ಮತ್ತು ಹಠಯೋಗದ ಭಾಗಗಳು. ಇವುಗಳು ಸುಪ್ರಸಿದ್ಧವಾದ, ವೈಜ್ಞಾನಿಕವಾದ, ಅತ್ಯುಪಯುಕ್ತವಾದ, ಸುವ್ಯಾವಹಾರಿಕವಾದ ಶಾರೀರಿಕ ಮತ್ತು ಉಸಿರಾಟದ ಮೇಳೈಕೆ ಇರುವ ವ್ಯಾಯಾಮಗಳು. ಆಯ್ದ ನಿತ್ಯಾಭ್ಯಾಸಗಳು ಆರೋಗ್ಯ ಮಾತ್ರವಲ್ಲ ಎಲ್ಲಾ ಕಾರಣಕ್ಕೂ ತುಂಬಾ ಪ್ರಯೋಜನಕಾರಿ. ವೈಯುಕ್ತಿಕ ಶಕ್ತಿ ಸ್ಪಂದನಗಳನ್ನು ಈ ಮೂಲಕ ಪುನರ್ರೂಪೀಕರಿಸಿಕೊಳ್ಳಬಹುದು.
29. ಸಾಮಾನ್ಯ ಆಹಾರ ಪಥ್ಯಾಪಥ್ಯ; ಮತ್ತು ಶಕ್ತ್ಯಾಧಾರಿತ ಪಥ್ಯಾಪಥ್ಯ
ಸಾಮಾನ್ಯ ಆಹಾರ ಪಥ್ಯಾಪಥ್ಯದ ಪ್ರಾಮುಖ್ಯತೆಯ ಬಗ್ಗೆ ಮಾತನಾಡಬೇಕಾದ ಆವಶ್ಯಕತೆ ಇಲ್ಲ. ಆದರೆ, ಶಕ್ತ್ಯಾಧಾರಿತ ಪಥ್ಯಾಪಥ್ಯವು ವಿಭಿನ್ನವೂ ಅತಿ ಮುಖ್ಯವೂ ಆದುದು. ಸಾಮಾನ್ಯ ಆಹಾರ ಪಥ್ಯಾಪಥ್ಯವು ಶಕ್ತ್ಯಾಧಾರಿತ ಪಥ್ಯಾಪಥ್ಯವನ್ನು ಅತಿಕ್ರಮಿಸಬಾರದು. ಆಹಾರ ಕೊಡುವ ವ್ಯಕ್ತಿಗಳಿಂದಾಗಿ ಬರುವ ಮತ್ತು ಪ್ರಕೃತಿ ಸಹಜವಾಗಿರುವ ಆಹಾರದ ಸತ್ವ, ರಜ ಮತ್ತು ತಮೋ ಗುಣಗಳು; ಆಹಾರದ ವಾತ, ಪಿತ್ಥ ಮತ್ತು ಕಫ ಸ್ವಭಾವ [ಆಯುರ್ವೆದವು ಇದನ್ನು ವಿವರಿಸುತ್ತದೆ]; ಆಹಾರದ ಶಕ್ತಿಯ ಮಟ್ಟಗಳು ವೈಯುಕ್ತಿಕ ಶಕ್ತಿ ಮತ್ತು ಸ್ಪಂದನದಲ್ಲಿ ಗಂಭೀರ ಪಾತ್ರವಹಿಸುತ್ತದವೆ. ಇದರೊಂದಿಗೆ ಆಧುನಿಕ ವೈಜ್ಞಾನಿಕ ಪಥ್ಯಾಪಥ್ಯಗಳನ್ನೂ ಗಮನಿಸುವುದು ವಿಹಿತವಾಗಿರುತ್ತದೆ.
30. ಮಾನುಷ ಸಂಬಂಧ ಮತ್ತು ಮತ್ತು ಸ್ಪಂದನ ನಿಯಂತ್ರಣ
ವಿವಿಧ ವ್ಯಕ್ತಿಗಳೊಡನೆ ನಮಗಿರುವ ಸಂಪರ್ಕ, ಸಂವಹನ ಮತ್ತು ಸಂಬಂಧಗಳನ್ನು ಶಕ್ತಿ ಮತ್ತು ಸ್ಪಂದನಗಳ ದೃಷ್ಟಿಕೋನದಿಂದ ನೋಡಬೇಕು. ಇಲ್ಲಿ ನಮ್ಮ ಮೇಲೆ ಧನಾತ್ಮಕ ಮತ್ತು ಋಣಾತ್ಮಕವಾದ ಎರಡೂ ಪ್ರಭಾವಗಳಿರುತ್ತವೆ. ಇದು ಬಹು ಕಠಿಣ ಕಾರ್ಯ.ಆದ್ದರಿಂದ ವಿವಿಧ ವ್ಯಕ್ತಿಗಳೊಡನೆ ನಮಗಿರುವ ಸಂಪರ್ಕ, ಸಂವಹನ ಮತ್ತು ಸಂಬಂಧಗಳನ್ನು ಸರಿಯಾದ ರೀತಿಯ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು.
ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆಗಿರುವ ಪ್ರಧಾನವಾಗಿರುವ ಶಕ್ತಿ ಮತ್ತು ಸ್ಪಂದನವಿರುತ್ತದೆ. ಇದು ಅನ್ಯರ ಮೇಲೆ ತಿಳಿಯದಂತೆ ಪ್ರಭಾವ ಬೀರುತ್ತಿರುತ್ತದೆ. ಇದು ಉಭಯತ್ರ ಪ್ರಭಾವಿ. ತನಗೆ ದೋಷ ತರಬಹುದಾದ ಶಕ್ತಿ ಮತ್ತು ಸ್ಪಂದನವಿರುವ ವ್ಯಕ್ತಿಯೊಡನೆ ಇಡುವ ಕೇವಲ ಸಂಪರ್ಕ/ಸಂಬಂಧವೇ ದುಃಸ್ಥಿತಿಯನ್ನು ತರಲು ಸಾಧ್ಯವಿದೆ. ಓರ್ವನ ಶಕ್ತಿ ಸ್ಪಂದನವು ಒಬ್ಬತನಿಗೆ ಹಾನಿಕಾರಕವಾಗಿರುವಾಗ ಅದು ಇನ್ನೊಬ್ಬಾತನಿಗೆ ಹಾಗಾಗಬೇಕಾಗಿಲ್ಲ. ಕೆಲವೊಮ್ಮೆ ಒಬ್ಬಾತನೊಡನೆ ಇರುವ ಸಂಪರ್ಕಮಾತ್ರವೂ ತುಂಬಾ ಒಳ್ಳೆಯದನ್ನು ತರಬಹುದು. ಯಾರಿಗೆ ಗೊತ್ತು! ನಿಮ್ಮ ಕಾರು ಚಾಲಕನು ನಿಮ್ಮ ಅದೃಷ್ಟ ರತ್ನವಾಗಿರಬಹುದು! ನಿಮ್ಮ ಮನೆಗೆ ನಿಯತವಾಗಿ ಭೇಟಿ ನೀಡುವ ಒಬ್ಬಾತ ನಿಮ್ಮ ಮನೆಯಿಂದ ಶಕ್ತಿ ಹೀರುವ ವ್ಯಾಂಪೈರ್ ಆಗಿರಬಹುದು. [ನಿಜವಾಗಿ ಇದು ಅವರಿಗೇ ಗೊತ್ತಿಲ್ಲದೇ ನಡೆಯುವ ಕ್ರಿಯೆ. ಅವರ ತಪ್ಪಿರುವುದಿಲ್ಲ]. ನೀವು ನಿಮ್ಮ ಮತ್ತು ಅನ್ಯರ ಶಕ್ತಿಸ್ವರೂಪ ಮತ್ತು ಸ್ಥಿತಿಗಳನ್ನು ಅರ್ಥಮಾಡಿಕೊಂಡರೆ ಅವುಗಳಲ್ಲಿ ಹೊಂದಾಣಿಕೆ ಇದೆಯೇ ಎಂದು ನೋಡಿಕೊಳ್ಳಬಹುದು.
31. ಜೀವನ ಶೈಲಿಯ ಮತ್ತು ಅಭ್ಯಾಸಗಳ ಬದಲಾವಣೆ.
ನಮ್ಮ ಜೀವನ ಶೈಲಿ ಮತ್ತು ಅಭ್ಯಾಸಗಳಿಂದ ಅವುಗಳದ್ದೇ ಆದ ಪರಿಣಾಮಗಳಿವೆ. ನಾವು ಅವುಗಳ ಬಗ್ಗೆ ಸಾಮಾನ್ಯ ಮತ್ತು ಶಕ್ತಿ-ಸ್ಪಂದನಗಳ ದೃಷಿಕೋನಗಳಿಂದ ಅಧ್ಯಯನ ಮಾಡಬೇಕು. ನಾವು ಆವಶ್ಯಕತೆಗಳಿಗನುಗುಣವಾಗು ಅವುಗಳ ಪುನರ್ರೂಪೀಕರಣ ಮಾಡಬೇಕಾಗಿ ಬರಬಹುದು. ನಮ್ಮ ವೈಯುಕ್ತಿಕ ಶಕ್ತಿ ಸ್ಪಂದನಗಳು ಮತ್ತು ನಿಮ್ಮ ಗುರಿ ಇತ್ಯಾದಿ ಉದ್ದೇಶಗಳಿಗೆ ನಮ್ಮದೇ ಜೀವನ ಶೈಲಿ ಮತ್ತು ಅಭ್ಯಾಸಗಳಿಂದ ಉತ್ಪತ್ತಿಯಾಗುವ ಶಕ್ತಿ ಸ್ಪಂದನಗಳು ಪೂರಕವಾಗಿ ಇರಬೇಕು. ಇದು ದಿನಪೂರ್ತಿಯ ಎಲ್ಲಾ ಅಭ್ಯಾಸಗಳನ್ನೂ ಕೂಡಾ ಒಳಗೊಳ್ಳುತ್ತದೆ. ಒಂದು ಉದಾಃ – ನಮಗೆ ಸಾತ್ವಿಕ ಸೃಷ್ಟಿಶೀಲ ಶಕ್ತಿಯು ಬೇಕಾಗಿರುವುದಾದರೆ ಅದು ದಿನದ ಬೆಳ್ಳಂಬೆಳಗಿನ (ಬ್ರಾಹ್ಮೀ ಮುಹೂರ್ತ) ಕಾಲದಲ್ಲಿ ಮಾತ್ರ ಸಂಗ್ರಾಹ್ಯವಾಗಿರುತ್ತದೆ. ನಾವು ಆ ಸಮಯದಲ್ಲಿ ಎಚ್ಚರದಲ್ಲಿ ಇರದಿದ್ದರೆ ಅದು ಲಭ್ಯವಾಗದು.
32. ವರ್ತನೆ,ಧೋರಣೆ-ಮನೋಭಾವ , ಸಮೀಪನ ಶೈಲಿ, ಮನೋಪೂರ್ವನಿರ್ಣಯ (ಪೂರ್ವಾಗ್ರಹವೂ), “ಗುಣ”, ಯೋಚನೆ ಇತ್ಯಾದಿಗಳ ಬದಲಾವಣೆ
ಎಲ್ಲರೂ ತಿಳಿದಿರುವಂತೆ ವರ್ತನೆ, ಮನೋಭಾವ, ಸಮೀಪನ ಶೈಲಿ, ಮನೋಪೂರ್ವನಿರ್ಣಯ[ಪೂರ್ವಾಗ್ರಹ ಕೂಡಾ], ಗುಣ, ಯೋಚನೆ ಇತ್ಯಾದಿಗಳು ಎಲ್ಲರ ಜೀವನದಲ್ಲಿ ಮಹತ್ವದ ಪಾತ್ರವಹಿಸುತ್ತವೆ. ವ್ಯಕ್ತಿತ್ವ ತರಬೇತಿದಾರರು ಮತ್ತು ಮಾನಸಿಕ ಸಲಹಾಕಾರರಂತಹ ವ್ಯಕ್ತಿಗಳು ಇಂತಹ ವಿಚಾರಗಳನ್ನು ಕಲಿಸುತ್ತಾರೆ. ಅವರು ಸೀಮಿತ ಪರಿಧಿಯವರೆಗೆ ಮಾತ್ರ ಸರಿಪಡಿಸಬಲ್ಲರು. ಆದರೆ ಅದಕ್ಕಿಂತ ಹೆಚ್ಚು ಅದರೊಂದಿಗೆ ಶಕ್ತಿ ಸ್ಪಂದನ ವಿಜ್ಞಾನವು ಜೋಡಿಕೊಂಡಿದೆ. ಈ ಮನೋಶಕ್ತಿವಿಜ್ಞಾನವು ವ್ಯಾಪಕವಾದುದು ಮತ್ತು ಆಳವಾದುದು. ಸ್ವಲ್ಪ ಮಾತ್ರವಿಲ್ಲಿ ಉಲ್ಲೇಖಿಸುತ್ತೇನೆ.
ಯೋಚನೆಯ ಸತ್ವ, ರಜ ಮತ್ತು ತಮ ಗುಣಗಳು ಒಂದು ನಿರ್ಣಾಯಕ ಅಂಶ. ಇನ್ನು, ಜನರು ಅಂಟಿಕೊಂಡಿರುವ “ಅರಿಶಡ್ವರ್ಗಗಳು” = “ಆರು ಶತ್ರುವರ್ಗಗಳು” ಇಂತಿವೆ,
- ಕಾಮ
- ಕ್ರೋಧ
- ಲೋಭ
- ಮೋಹ
- ಮದ
- ಮಾತ್ಸರ್ಯ
ಇವುಗಳು ನಿಶ್ಚಯವಾಗಿ ನಮ್ಮನ್ನು ಶೋಚನೀಯಾವಸ್ಥೆಗೆ ತಲಪಿಸುತ್ತವೆ.
ಪುನರಪಿ, ನೆನಪಿಸಬಯಸುವುದು – “ಶಕ್ತಿಯು ಮನೋನುಸಾರಿಯಾಗಿದೆ” ಎನ್ನುವ ನಿಯಮವನ್ನು. ಇದು ವಿಸ್ತಾರವಾದ ಆಟದ ಬಯಲನ್ನು ಹೊಂದಿದೆ. ವ್ಯಕ್ತಿಯೊಬ್ಬನ ವರ್ತನೆಯು ಅನ್ಯರಲ್ಲಿ ಸ್ಪಂದನವನ್ನು ಉದ್ದೀಪಿಸುತ್ತದೆ. ಸೂಕ್ತ ವರ್ತನೆಯು ಅನುಕೂಲಕರ ಸ್ಪಂದನವನ್ನು ಅನ್ಯರಲ್ಲಿ ಪ್ರೇರೇಪಿಸಬಹುದು.
33. ನಿಜಯೋಗಿ/ಸಂತರ, ವಿವಿಧ ಕ್ಷೇತ್ರದ ಸಾಧಕರ ಆಶೀರ್ವಾದ
ಇಂತಹ ಶ್ರೇಷ್ಠ ಪೂಜ್ಯರ ಆಶೀರ್ವಾದ ಅನುಗ್ರಹಗಳಿಂದ ಮಾತ್ರ ಎಷ್ಟೋ ಕಷ್ಟಗಳು ಪರಿಹಾರವಾದಾವಷ್ಟೆ. ಯಾವಾಗಲೂ ಅವರ ಆಶೀರ್ವಾದ ಫಲಿಸುತ್ತದೆ. ನಾವು ಯಾವಾಗಲೂ ಅವರಿಗೆ ತಲೆಬಾಗಿರಬೇಕು.